ನಂಬಿದವರ ಎಂದೆಂದೂ ಕಾಯುವ ಗೋವಿಂದ

ನಂಬಿದವರ ಎಂದೆಂದೂ ಕಾಯುವ ಗೋವಿಂದ
ಬಿಡಿಸು ದಾಸಿ ಮೀರೆಯ ಲೋಕದ ಸುಳಿಯಿಂದ.

ನಾಮದೇವ ಗೃಹದ ಮುಂದೆ ಚಪ್ಪರವನು ಕಟ್ಟಿದೆ
ಧನ್ನಾಭಕ್ತನ ಹೊಲದಲಿ ಬೆವರ ಸುರಿಸಿ ಬಿತ್ತಿದೆ,
ಕರಮಾಬಾಯಿ ನೀಡಿದ ಖಿಚಡಿಯೆಲ್ಲ ತಿಂದೆ
ಭಕ್ತ ಕಬೀರನ ಮನೆಯ ಎತ್ತು ಹೊಡೆದು ತಂದೆ?

ಸವಿಯಿತ್ತೇ, ರುಚಿನೋಡಿ ಶಬರಿ ಆಯ್ದ ಬೋರೆ
ಹಿತವಿತ್ತೇ ಸುದಾಮನ ತಂಡುಲದ ಸೇವೆ,
ಕುಬ್ಜೆ ಕೊಟ್ಟ ಹೂವು ಗಂಧ ಪ್ರಿಯವಾಯಿತೆ ಹೇಗೆ
ಆ ಭಕ್ತಿಗೆ ನೇರವಾಯ್ತೆ ವಕ್ರ ದೇಹ ಮೋರೆ?

ಎಷ್ಟು ಕರೆಯಬೇಕೊ ನಿನ್ನ, ಕೇಳಿಸದೇ ಕಿವುಡ?
ಎಷ್ಟು ಹಾಡಿ ಕುಣಿದರೂ ಕಾಣಿಸದೇ ಕುರುಡ?
ಇಷ್ಟು ಕ್ರೂರಮನವು ಏಕೆ ಹೇಳೋ ಗಿರಿಧರನೆ?
ಈ ಮೀರಾ ಮೇಲೆ ತೋರೊ ಒಂದೇ ಹನಿ ಕರುಣೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಗ್ಗಟ್ಟು
Next post ಮಂಥನ – ೧೦

ಸಣ್ಣ ಕತೆ

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

cheap jordans|wholesale air max|wholesale jordans|wholesale jewelry|wholesale jerseys